ಕಾರ್ಕಳ ತಾಲೂಕುದ ಗ್ರಾಮೀಣ ಭಾಗದ ಜನಕ್ಲೆನ ಬಾರೀ ದಿನತ್ತ ಬೇಡಿಕೆಯಾದಿತ್ತಿನ ‘ಕುಕ್ಕುಂದೂರು ಗ್ರಾಮದ ಪರವು ಸೇತುವೆ, ರೆಂಜಾಳ ಗ್ರಾಮ ಪಂಚಾಯತ್ ದಲ್ಪದ ಸೇತುವೆ, ಬೋಳ ಗ್ರಾಮದ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದಲ್ಪದ ಸೇತುವೆ ನಿರ್ಮಾಣ ಕಾಮಗಾರಿಲೆಗ್ ತಲಾ 1.5 ಕೋಟಿ ರೂಪಾಯಿದಂಚ ಒಟ್ಟು ಮೊತ್ತ 4.5 ಕೋಟಿ ರೂಪಾಯಿಲೆನ್ ರಾಜ್ಯ ಸರ್ಕಾರ ಬುಡುಗಡೆ ಮಲ್ದುಂಡ್.
ಕೆಲವ್ ವರ್ಷಡಿಂಚಿ ಜನ ಸಂಚಾರಗ್ ಅತೀ ಅಗತ್ಯವಾದ್ ಸುಸಜ್ಜಿತ ಸೇತುವೆ ನಿರ್ಮಾಣ ಆವೊಡ್ ಪನ್ಪಿನ ದನಿ ಬೋಳ ರೆಂಜಾಳ ಕುಕ್ಕುಂದೂರು ಭಾಗದ ಜನಕ್ಲೆಡ್ದ್ ಕೇನೊಂದಿತ್ತುಂಡ್., ಕುಕ್ಕುಂದೂರು ಗ್ರಾಮದ ನಕ್ಕೆ ಪರಪ್ಪು ರಸ್ತೆ ಅಗಲ ಬಜೀ ಸಪೂರ ಆದಿತ್ತುದ್ ಘನ ವಾಹನೊಲೆನ ಸಂಚಾರಗ್ ಬಾರೀ ತೊಂದರೆ ಆವೊಂದಿತ್ತುಂಡ್ ಬೊಕ್ಕ ಸಾರ್ವಜನಿಕ ವಾಹನಲೆಗ್ ತೀವ್ರ ತೊಂದರೆಯಾವೊಂದುಂಡ್,ಮರಿಯಾಲೊಡ್ ಈತ್ ಕಿನ್ನ ರಸ್ತೆ ಡಾದ್ ಸ್ಥಳೀಯ ಜವ್ವನೆ ಒರಿ ಸಂಕಡ್ ಬೂರ್ದ್ ದುರ್ಮರಣಕ್ಕೀಡಾದ ಘಟನೆಯೂ ನಡೆದಿತ್ತು, ಈ ಎಲ್ಲಾ ಹಿನ್ನೆಲೆಯನ್ನು ಮನಗಂಡು ರಾಜ್ಯ ಸರ್ಕಾರವು ಪ್ರಸ್ತುತ ಸೇತುವೆ ಪುನರ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿರುತ್ತದೆ.
ಇಷ್ಟು ಮಾತ್ರವಲ್ಲದೆ ಹಬ್ಬಿ ಮತ್ತು ಕಾರ್ಕಳ ತಾಲೂಕು ಒಳಗೊಂಡಂತೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವಾರು ಗ್ರಾಮಗಳ ಒಟ್ಟು 29 ಪ್ರಮುಖ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸುಮಾರು 25 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿರುತ್ತದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅನುದಾನಗಳ ಮಹಾಪೂರವನ್ನೇ ಹರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾನ್ಸರ್ ಹಾಗೂ ಸಂಪುಟದ ಎಲ್ಲಾ ಸಚಿವರುಗಳಿಗೆ ಕಾರ್ಕಳ ಜನತೆಯ ಪರವಾಗಿ ಹೃತ್ತೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಭಾರತ ಹಳ್ಳಿಗಳ ದೇಶ, ಹಳ್ಳಿಯ ಜನರೇ ದೇಶದ ಜೀವಾಳ, ನಾವು ಇವತ್ತು ಉಣ್ಣುವ ಅನ್ನ ಕುಡಿಯುವ ಹಾಲು, ತರಕಾರಿ, ದವಸ ಧಾನ್ಯ ಎಲ್ಲವೂ ಗ್ರಾಮೀಣ ಭಾಗದ ಜನರ, ರೈತರುಗಳ, ಹೈನುಗಾರರ ದುಡಿಮೆಯ ಫಲ. ಕಾರ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಒಂದು ದಿನ ಪ್ರತಿ ಗ್ರಾಮದಲ್ಲಿ ವಾಸ್ತವ್ಯವನ್ನು ಹೂಡಿ ಗ್ರಾಮೀಣ ಭಾಗದ ಜನ ಜೀವನವನ್ನು ಪ್ರತ್ಯಕ್ಷವಾಗಿ ಕಾಣುವ ಅವರ ಸುಖ ದುಃಖಗಳೊಂದಿಗೆ ಬೆರೆಯುವ ವಿನೂತನ ಕಾರ್ಯಕ್ರಮ ಗ್ರಾಮೋದಯ ಜನಸ್ಪಂದನ ಕಾರ್ಯಕ್ರಮವನ್ನು ನಾವು ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದೇವೆ.
ನಮ್ಮ ಗ್ರಾಮೋದಯ ಜನಸ್ಪಂದನ ಕಾರ್ಯಕ್ರಮಕ್ಕೆ ಜನರು ಅತ್ಯುತ್ತಮ ಸ್ಪಂದನೆಯನ್ನು ನೀಡುತ್ತಿರುವುದರಿಂದ ವಿಚಲಿತವಾಗಿರುವ ಬಿಜೆಪಿ ಗ್ರಾಮೋದಯ ಜನಸ್ಪಂದನ ಕಾರ್ಯಕ್ರಮದ ಬಗೆ, ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡುತ್ತಿದೆ. ಗ್ರಾಮೋದಯ ಜನಸ್ಪಂದನೆ ಕಾರ್ಯಕ್ರಮಕ್ಕೆ ಬಿಜೆಪಿಯ ಅಸಹನೆ ಯಾವ ಮಟ್ಟಕ್ಕಿದೆಯೆಂದರೆ ಪ್ರಥಮ ಗ್ರಾಮೋದಯ ಜನಸ್ಪಂದನ ಕಾರ್ಯಕ್ರಮ ನಡೆದ ಮುಂಡೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿ ಹಲ್ಲೆ ಮಾಡುವ ಹತಾಶೆಯ ಹಂತಕ್ಕೆ ತಲುಪಿದೆ. ಕಾರ್ಕಳದಲ್ಲಿ ಬಿಜೆಪಿಯ ಸರ್ವಾಧಿಕಾರಿ ಧೋರಣೆ ಇನ್ನು ಮುಂದೆ ನಡೆಯುವುದಿಲ್ಲ.
ಬಿಜೆಪಿಯ ಹಲ್ಲೆ, ದಾದಗಿರಿ, ದಬ್ಬಾಳಿಕೆಗೆ ಹೆದರುವವರು ನಾವಲ್ಲ, ಮುಂಬರುವ ದಿನಗಳಲ್ಲಿ ಕಾರ್ಕಳದ ಪ್ರತಿ ಗ್ರಾಮ ಗ್ರಾಮಗಳಲ್ಲಿ ಗ್ರಾಮೋದಯ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ, ಬಿಜೆಪಿ ಅವರಿಗೆ ಧೈರ್ಯವಿದ್ದರೆ ಇದನ್ನು ತಡೆದು ತೋರಿಸಲಿ.




















by