• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home news

ಮೇರಿ ಪುಟ್ಟು ಪರ್ಬ,ಕುರಲ್ ಪರ್ಬ

Tulunada Dhwani by Tulunada Dhwani
September 8, 2026
in news
0
ಮೇರಿ ಪುಟ್ಟು ಪರ್ಬ,ಕುರಲ್ ಪರ್ಬ
0
SHARES
0
VIEWS
Share on FacebookShare on TwitterShare on WhatsApp

ಉಡುಪಿ: ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಮಂಗಳವಾರ ಮಾತೆ ಮೇರಿ ಹುಟ್ಟುಹಬ್ಬ ಮತ್ತು ತೆನೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಚರ್ಚ್ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ, ಮಾತೆ ಮೇರಿಯಮ್ಮ ಅವರ ಬಾಲ ರೂಪಕ್ಕೆ ಮಕ್ಕಳಿಂದ ಪುಷ್ಪಾರ್ಚನೆ ನಡೆದರೆ, ಮನೆ ಮನೆಗಳಲ್ಲಿ ಸಸ್ಯಾಹಾರಿ ಊಟ, ಹೊಸ ಅಕ್ಕಿಯ ಹಾಲು ಪಾಯಸದೂಟದೊಂದಿಗೆ ಸಂಭ್ರಮಿಸಿದರು.
ಕಳೆದ ಒಂಬತ್ತು ದಿನಗಳಿಂದ ಮಾತೆ ಮೇರಿಯ ಬಾಲ ರೂಪಿ ಪ್ರತಿಮೆಗೆ ಮಕ್ಕಳು ಸಲ್ಲಿಸುವ ಪುಷ್ಪಾರ್ಚನೆಯ ವೈಭವದ ಉತ್ತುಂಗ ರೂಪ ಮಂಗಳವಾರ ಕರಾವಳಿಯ ಪ್ರತಿ ಚರ್ಚ್ನಲ್ಲಿ ಅನಾವರಣಗೊಂಡಿತು. ಗ್ರೊಟ್ಟೋದ ಮುಂಭಾಗದಲ್ಲಿ ಇರಿಸಿದ ಪ್ರತಿಮೆಗೆ ನೆರೆದ ನೂರಾರು ಮಕ್ಕಳು, ಹಿರಿಯರು ಬಣ್ಣ ಬಣ್ಣದ ಪುಷ್ಪಗಳು, ಎಸಳುಗಳನ್ನು ಪ್ರೋಕ್ಷಿಸಿ ಭಕ್ತಿ, ಖುಷಿ ಮೆರೆದರು. ಮಾತೆಯ ಮೇಲಿನ ಗೌರವ, ಭಕ್ತಿ, ಹೆಣ್ಮಕ್ಕಳ ರಕ್ಷಣೆಯ ಕಾಳಜಿಗಳು ಇಲ್ಲಿ ತೆರೆದುಕೊಂಡವು.
ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಧರ್ಮಗುರುಗಳು ತೆನೆ ಪೂಜೆ, ಬಲಿ ಪೂಜೆ ನೆರವೇರಿಸಿದರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರ ಅನುಪಸ್ಥಿತಿಯಲ್ಲಿ, ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೊಸ ತೆನೆಯನ್ನು ಆಶೀರ್ವಚಿಸಿ ಹಬ್ಬದ ಪವಿತ್ರ ಬಲಿಪೂಜೆಯನ್ನು ನೆರವೇರಿಸಿ ಹಬ್ಬದ ಸಂದೇಶ ನೀಡಿದರು.
ಅವರು ತಮ್ಮ ಸಂದೇಶದಲ್ಲಿ ಮೊಂತಿ ಹಬ್ಬವು ಧಾರ್ಮಿಕ ಮಹತ್ವವನ್ನು ಹೊಂದಿರುವುದರ ಜೊತೆಗೆ, ಕೃತಜ್ಞತೆ, ಕುಟುಂಬ, ಹಂಚಿಕೆ ಮತ್ತು ಪರಸ್ಪರ ಕಾಳಜಿಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಸಾರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯೂ ಆಗಿದೆ.
ಇದು ಪರಸ್ಪರ ಕಾಳಜಿ, ಕಳಕಳಿ ಮತ್ತು ಕ್ಷಮೆಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಸಂದರ್ಭವೂ ಆಗಿದೆ. ಕುಟುಂಬದ ಸದಸ್ಯರು ಪರಿಪೂರ್ಣರಾಗಿರುವುದರಿಂದ ಕುಟುಂಬ ಬಲಿಷ್ಠವಾಗುವುದಿಲ್ಲ; ಬದಲಾಗಿ, ಪರಸ್ಪರ ಅರ್ಥಮಾಡಿಕೊಳ್ಳಲು, ತಪ್ಪುಗಳನ್ನು ಕ್ಷಮಿಸಲು, ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಲು ಮತ್ತು ಸಂತೋಷದ ಕ್ಷಣಗಳನ್ನು ಪರಸ್ಪರ ಹಂಚಿಕೊಳ್ಳಲು ಸಿದ್ಧರಾಗಿರುವುದರಿಂದ ಕುಟುಂಬ ಬಲಿಷ್ಠವಾಗುತ್ತದೆ. ಕ್ಷಮೆ ಸಂಬಂಧಗಳನ್ನು ಗುಣಪಡಿಸುತ್ತದೆ; ಮೆಚ್ಚುಗೆ ಮತ್ತು ಪ್ರೋತ್ಸಾಹ ಅವುಗಳನ್ನು ಇನ್ನಷ್ಟು ಬಲಪಡಿಸುತ್ತವೆ.
ಮೊಂತಿ ಹಬ್ಬದ ಆಚರಣೆಯು ಭೂಮಿಯೊಂದಿಗಿನ ನಮ್ಮ ಸಂಬಂಧವನ್ನೂ ನೆನಪಿಸುತ್ತದೆ. ಹೊಸ ಬೆಳೆ, ಫಲ-ಪುಷ್ಪಗಳು ಪ್ರಕೃತಿಯ ಔದಾರ್ಯ ಮತ್ತು ಭೂಮಿಯನ್ನು ದುಡಿದು ಬೆಳೆಸುವ ರೈತರ ಪರಿಶ್ರಮದ ಸಂಕೇತವಾಗಿದೆ. ನಾವು ಪಡೆಯುವ ಆಹಾರಕ್ಕಾಗಿ ಕೃತಜ್ಞರಾಗಿರಲು, ರೈತರ ಪರಿಶ್ರಮವನ್ನು ಗೌರವಿಸಲು ಹಾಗೂ ಪರಿಸರವನ್ನು ಜವಾಬ್ದಾರಿಯಿಂದ ಕಾಪಾಡಲು ನಮಗೆ ಕರೆ ನೀಡುತ್ತದೆ.
ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನವು ಈ ಹಬ್ಬಕ್ಕೆ ಧಾರ್ಮಿಕ ಅರ್ಥವನ್ನು ಕಲ್ಪಿಸುವುದರ ಜೊತೆಗೆ ಮೊಂತಿ ಹಬ್ಬವು ಸಾರುವ ಮೌಲ್ಯಗಳು ಧರ್ಮದ ಗಡಿಗಳನ್ನು ಮೀರಿ ಎಲ್ಲರನ್ನೂ ಸ್ಪರ್ಶಿಸುತ್ತವೆ. ಕೃತಜ್ಞತೆ, ಹಂಚಿಕೆ, ಹಿರಿಯರಿಗೆ ಗೌರವ, ಕುಟುಂಬ ಪ್ರೀತಿ, ಕ್ಷಮೆ, ಪರಸ್ಪರ ಕಾಳಜಿ ಮತ್ತು ಪ್ರಕೃತಿಯ ಬಗ್ಗೆ ಗೌರವ?ಇವು ಯಾವುದೇ ಸಮಾಜವನ್ನು ಶ್ರೀಮಂತಗೊಳಿಸುವ ಸಾರ್ವತ್ರಿಕ ಮೌಲ್ಯಗಳಾಗಿವೆ ಎಂದರು
ಉಡುಪಿ ಶೋಕಮಾತಾ ದೇವಾಲಯದಲ್ಲಿ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆ ನೆರವೇರಿತು. ವಂ| ಪ್ರವೀಣ್ ಲಿಯೋ ಹಾಗೂ ವಂ|ವಿಜಯ್ ಡಿಸೋಜಾ ಉಪಸ್ಥಿತರಿದ್ದರು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಹಾಗೂ ಚರ್ಚಿನ ರೆಕ್ಟರ್ ಮೊನ್ಞಿಂಜ್ಞೋರ್ ಫ್ರಾನ್ಸಿಸ್ ಲೂವಿಸ್ ಹೊಸ ತೆನೆಯನ್ನು ಆಶೀರ್ವಚಿಸಿ ಪವಿತ್ರ ಬಲಿಪೂಜೆ ಅರ್ಪಿಸಿದರು.
ಮಾತೆ ಮೇರಿಯ ಜನ್ಮ ದಿನದಂದೇ ಕರಾವಳಿಯಲ್ಲಿ ವಿಶೇಷವಾಗಿ ಆಚರಿಸುವ ತೆನೆ ಹಬ್ಬ ಮನೆ ಮನೆಗಳಲ್ಲಿ ಸಂಭ್ರಮಕ್ಕೆ ಕಾರಣವಾಯಿತು. ಮುಂಜಾನೆಯೇ ಭತ್ತದ ತೆನೆ ಮತ್ತು ಕಬ್ಬನ್ನು ಗುರಿಕಾರರು ಚರ್ಚ್ಗೆ ಮೆರವಣಿಗೆಯಲ್ಲಿ ಕೊಂಡೊಯ್ದರು ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನಡೆಸಿ ಭಕ್ತರಿಗೆ ಹಂಚಲಾಯಿತು.
ಭತ್ತದ ತೆನೆಯನ್ನು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದ ಭಕ್ತರು ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದರು. ಭತ್ತದ ಕಾಳಿನ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಲು, ತೆಂಗಿನ ಹಾಲು, ಪಾಯಸದ ಮೂಲಕ ಹೊಸ ಅಕ್ಕಿಯ ಊಟ ಸವಿದರು. ಸಂಪೂರ್ಣ ಶಾಖಾಹಾರಿ ಆಹಾರ ವಿಶೇಷವಾಗಿತ್ತು.
ಇದಲ್ಲದೆ ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ|ಆಲ್ಬನ್ ಡಿಸೋಜಾ, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ|ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಂ|ಚಾರ್ಲ್ಸ್ ಮಿನೇಜಸ್ ಸೇರಿದಂತೆ ಇನ್ನಿತರ ಚರ್ಚುಗಳಲ್ಲಿ ಕೂಡ ತೆನೆಹಬ್ಬ ಮತ್ತು ಮಾತೆ ಮೇರಿಯ ಜನ್ಮ ದಿನವನ್ನು ವಿಜಂಭಣೆಯಿಂದ ಆಚರಿಸಲಾಯಿತು.

Previous Post

ಪಡುಬಿದ್ರಿ ಟೋಲ್ ಗೇಟ್

Related Posts

ಪಡುಬಿದ್ರಿ ಟೋಲ್ ಗೇಟ್
news

ಪಡುಬಿದ್ರಿ ಟೋಲ್ ಗೇಟ್

September 5, 2026
ಕೇಪು ಅಜಿಲೆರೆಗ್ ಚಾವಡಿ ತಮ್ಮನ
news

ಕೇಪು ಅಜಿಲೆರೆಗ್ ಚಾವಡಿ ತಮ್ಮನ

September 3, 2026
ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ.
news

ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ.

September 2, 2026
ಕೇರಳ ಸಮಾಜಂ ವತಿಡ್ದ್ ಓಣಂ ಆಚರಣೆ
news

ಕೇರಳ ಸಮಾಜಂ ವತಿಡ್ದ್ ಓಣಂ ಆಚರಣೆ

September 2, 2026

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಮೇರಿ ಪುಟ್ಟು ಪರ್ಬ,ಕುರಲ್ ಪರ್ಬ

ಮೇರಿ ಪುಟ್ಟು ಪರ್ಬ,ಕುರಲ್ ಪರ್ಬ

September 8, 2026
ಪಡುಬಿದ್ರಿ ಟೋಲ್ ಗೇಟ್

ಪಡುಬಿದ್ರಿ ಟೋಲ್ ಗೇಟ್

September 5, 2026
ಕಿಷ್ಣೆ ಪಂಡಿನ ಧರ್ಮ

ಕಿಷ್ಣೆ ಪಂಡಿನ ಧರ್ಮ

September 4, 2026
ಕೇಪು ಅಜಿಲೆರೆಗ್ ಚಾವಡಿ ತಮ್ಮನ

ಕೇಪು ಅಜಿಲೆರೆಗ್ ಚಾವಡಿ ತಮ್ಮನ

September 3, 2026
ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ.

ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ.

September 2, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ