• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 





Home ಸುದ್ದಿ

ಅಕ್ಕಿ ಮುಹೂರ್ತ

Tulunada Dhwani News Desk by Tulunada Dhwani News Desk
February 25, 2025
in ಸುದ್ದಿ
0
ಅಕ್ಕಿ ಮುಹೂರ್ತ
0
SHARES
1
VIEWS
Share on FacebookShare on TwitterShare on WhatsApp

ಲೇಖನ:
” ಅನ್ನವಿಠ್ಠಲನ ಅಂಗಳದಲ್ಲಿ ಅಕ್ಕಿಮುಹೂರ್ತ:”

ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ವಾಮನತೀರ್ಥ ಪರಂಪರೆಯ ಶ್ರೀ ಶೀರೂರುಮಠ ಮುಂದಿನ ಪರ್ಯಾಯದ ಹೊಸ್ತಿಲಲ್ಲಿದೆ.ಶ್ರೀ ವಾದಿರಾಜರ ಸತ್ಸಂಪ್ರದಾಯದಂತೆ ಕೃಷ್ಣ-ಪ್ರಾಣದೇವರ ಪೂಜಾದೀಕ್ಷೆಯ ಮುಂಚಿತ ನಡೆಯುವ ಅಕ್ಕಿಮುಹೂರ್ತದ ಸಡಗರ;ಸಂಭ್ರಮ.ಭಾವುಕ ಭಕ್ತರಿಗೊಂದು ಭಗವತ್ಪೂಜೆಯಲ್ಲಿ ಭಾಗವಹಿಸುವ ಪುಳಕ:ತವಕ.

ಮುಹೂರ್ತಗಳೆಂದರೆ ಪರ್ಯಾಯ ಪೂರ್ವ ತಯಾರಿಯ ಶುಭಾರಂಭ.ಎರಡು ವರ್ಷ ಶ್ರೀ ಕೃಷ್ಣನ ಸಾನಿಧ್ಯದಲ್ಲಿ ನಡೆಯುವ ನಿತ್ಯೋತ್ಸವ-ಅನ್ನದಾನಾದಿಗಳ ಪೂರ್ವಭಾವಿ ಕಾರ್ಯಗಳ ಧಾರ್ಮಿಕ ಆಚರಣೆ.
ಜಗದೋದ್ಧಾರ ಶ್ರೀ ಕೃಷ್ಣ ದೇವರಿಗೆ ನಿತ್ಯವೂ ಹದಿನಾರು ಪೂಜೆಗಳು.ವಿವಿಧ ಭಕ್ಷ್ಯ ಭೋಜ್ಯ,ಅನ್ನದ ನೈವೇದ್ಯಗಳ ಸಮರ್ಪಣೆ.ಜೊತೆಗೆ ಸಹಸ್ರಾರು ಭಕ್ತರಿಗೆ ಅನ್ನಪ್ರಸಾದದ ವಿತರಣೆ.ಈ ಹಿನ್ನೆಲೆಯಲ್ಲಿ ಆರಂಭವಾದ ಆಚರಣೆಯೇ ಬಾಳೆಮುಹೂರ್ತ,ಅಕ್ಕಿಮುಹೂರ್ತ, ಕಟ್ಟಿಗೆಮುಹೂರ್ತ ಹಾಗೂ ಭತ್ತಮುಹೂರ್ತಗಳು.ಇದೀಗ ಅಕ್ಕಿಮುಹೂರ್ತದ ಸರದಿ..

** ಅಕ್ಕಿಮುಹೂರ್ತದ ವೈಶಿಷ್ಟ್ಯ:

ಶ್ರೀ ಮದ್ವಾದಿರಾಜರ ಸತ್ಸಂಪ್ರದಾಯದಂತೆ ಸುಮಾರು ನಾಲ್ಕುನೂರು ವರ್ಷಗಳಿಂದ ಅಕ್ಕಿಮುಹೂರ್ತದ ಸಾಂಪ್ರದಾಯಿಕ ಆಚರಣೆ ನಡೆಯುತ್ತಿದೆ.ಯತಿಗಳಿಂದಲೇ ಪೂಜೆಗೊಳ್ಳುವ ಭಗವಂತನಿಗೆ ಯತಿಗಳಿಂದಲೇ ನೈವೇದ್ಯಾದಿಗಳ ಸಮರ್ಪಣೆ.ವಿವಿಧ ಭಕ್ಷ್ಯಗಳಿದ್ದರೂ ನೈವೇದ್ಯಗಳಲ್ಲಿ ‘ಅನ್ನ’ಕ್ಕೆ ಹೆಚ್ಚಿನ ಮಹತ್ವ. ಅಕ್ಕಿಯನ್ನು ಬೇಯಿಸಿ ಇಂಗಿಸಿದ ‘ ಉರುಳಿ ‘ಯೇ ಪ್ರಧಾನ ನೈವೇದ್ಯ. ನಿತ್ಯವೂ ನಡೆಯುವ ಹದಿನಾರು ಪೂಜೆಗಳಲ್ಲಿ ಪ್ರತೀ ಪೂಜೆಗೂ ಉರುಳಿಯ ಸಮರ್ಪಣೆ.ಕರಾವಳಿಯ ಈ ಮಣ್ಣಿನ ಎಲ್ಲಾ ಊಟೋಪಚಾರದಲ್ಲೂ ಅನ್ನವೇ ಪ್ರಮುಖ ಖಾದ್ಯ.ಅನ್ನ ಬ್ರಹ್ಮನೆಂಬ ಖ್ಯಾತಿಗಳಿಸಿದ ಉಡುಪಿ ಮಠದಲ್ಲೂ ಅನ್ನ ನೈವೇದ್ಯಕ್ಕೆ ವಿಶೇಷ ಸ್ಥಾನಮಾನ.

ಅಕ್ಕಿ ಸಾತ್ವಿಕತೆಯ ಪ್ರತೀಕ.ಅದಕ್ಕೆಂದೇ ಅನ್ನಕ್ಕೂ ಸಾತ್ವಿಕತೆ ಆಹಾರದ ಪಟ್ಟ.ದೇವತಾಕಾರ್ಯ,ಪಿತೃಕಾರ್ಯಗಳಲ್ಲೂ ಅಕ್ಕಿಗೆ ಮಹತ್ವದ ಸ್ಥಾನ. ಹಸಿವಿನ ತೃಷೆ ತೀರುವುದೂ ಅನ್ನದಿಂದಲೇ.ಅನ್ನದೇವರ ಮುಂದೆ ಇನ್ನು ದೇವರು ಉಂಟೇ..

** ಮುಷ್ಟಿ ಅಕ್ಕಿಯ ಸಮರ್ಪಣೆ:

ಪರ್ಯಾಯದ ಸುಮಾರು ಒಂಭತ್ತು ತಿಂಗಳ ಮುಂಚಿತವಾಗಿ ಅಕ್ಕಿಸಂಗ್ರಹ ಅಕ್ಕಿಮುಹೂರ್ತ ದಿಂದ ಶುಭಾರಂಭಗೊಳ್ಳುತ್ತದೆ.ಭಗವತ್ಪೂಜೆಯಲ್ಲಿ ಭಕ್ತಸಮೂಹಕ್ಕೂ ಅವಕಾಶ ಇರಬೇಕೆಂಬ ಶ್ರೀ ಮಠದ ಆಶಯದಂತೆ ಮುಷ್ಟಿ ಅಕ್ಕಿಸಮರ್ಪಣೆಯ ಸದಾವಕಾಶ.ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಅಕ್ಕಿಮುಡಿಯ ಜೊತೆಗೆ ಶ್ರೀ ಚಂದ್ರಮೌಳೀಶ್ವರ,ಅನಂತಾಸನ,ಶ್ರೀ ಕೃಷ್ಣ-ಮುಖ್ಯಪ್ರಾಣದೇವರಲ್ಲಿ ಪ್ರಾರ್ಥನೆ-ಮೆರವಣಿಗೆ.ಶ್ರೀ ಶೀರೂರು ಅನ್ನವಿಠ್ಠಲದೇವರ ಎದುರು ಮುಷ್ಟಿ ಅಕ್ಕಿಯ ಜೊತೆಗೆ ಅಕ್ಕಿಮುಡಿಯ ಸಮರ್ಪಣೆಯ ಅವಕಾಶ.ಭಕ್ತಜನರಿಗೆ ಭಗವಂತನಿಗೆ ಅರ್ಪಿಸುವ ಸುವಸ್ತುಗಳ ಸಮರ್ಪಣೆಯ ಭಾಗ್ಯ.ಹೂವಿನೊಂದಿಗೆ ಹೂವಿನ ದಾರವಾಗುವ ಸೌಭಾಗ್ಯ.ಭಕ್ತರು ಅರ್ಪಿಸಿದ ಮುಷ್ಟಿ ಅಕ್ಕಿಯಿಂದ ಮುಕ್ತಿ ಸಂಪನ್ನತೆಯ ಯೋಗ.ಸಾತ್ವಿಕ ಆಹಾರದಿಂದ ದೇಹ ಬುದ್ದಿ ಮನಸ್ಸುಗಳಿಗೂ ಸಾತ್ವಿಕ ಚಿಂತನೆಯ ಸಂಯೋಗ.ಬಾಳಲ್ಲಿ ಮೃಷ್ಟಾನ್ನ ಬೋಜನದ ಶುಭಸೂಚಕ.ಸರಳ ಸಾತ್ವಿಕಶಕ್ತಿಯ ಉದ್ದೀಪಕ.

ಶೀರೂರುಮಠದ ಪಟ್ಟದ ದೇವರು ಶ್ರೀ ವಿಠ್ಠಲ ದೇವರು. ಅನ್ನವಿಠ್ಠಲನೆಂದೇ ಪ್ರತೀತಿ;ಪ್ರಸಿದ್ಧಿ.ಅನ್ನವಿಠ್ಠಲನ ಪರ್ಯಾಯವೆಂದರೆ ಅನ್ನ ಸಮೃದ್ಧಿಯ ಪರ್ಯಾಯವೆಂದೇ ಜಗದ್ವಿಖ್ಯಾತಿ.ಈ ಹಿನ್ನೆಲೆಯಲ್ಲಿ ಅಕ್ಕಿಮುಹೂರ್ತ ಭಗವದನುಗ್ರಹದ ಭಕ್ತಿ ಭಗವತ್ಪೂಜೆಯಾಗಲಿ; ಭಗವತ್ಸಮರ್ಪಣೆಯ ಮುಕ್ತಿಪೂಜೆಯಾಗಲಿ..

✒️.ಅಶ್ವತ್ಥ ಭಾರದ್ವಾಜ್ ,
ಕಬ್ಬಿನಾಲೆ.
ಕನ್ನಡ ಉಪನ್ಯಾಸಕರು.


Previous Post

ಭಾರತ್ ಸ್ಕೌಟ್ & ಗೈಡ್ಸ್

Next Post

ಕಾಪುದಪ್ಪೆ

Related Posts

ಸಹಕಾರ ಧ್ವಜ ಚಿತ್ರ ಬುಡ್ಪಾವುನ ಪಂತ.
ಸುದ್ದಿ

ಸಹಕಾರ ಧ್ವಜ ಚಿತ್ರ ಬುಡ್ಪಾವುನ ಪಂತ.

July 13, 2026
ರೋಟರಿ ಕ್ಲಬ್ ಕೋಟೇಶ್ವರ
ಸುದ್ದಿ

ರೋಟರಿ ಕ್ಲಬ್ ಕೋಟೇಶ್ವರ

July 6, 2026
ತುಲು ಲಿಪಿ ತರಬೇತಿ
ತುಲುನಾಡ ಸುದ್ದಿಲು

ತುಲು ಲಿಪಿ ತರಬೇತಿ

June 25, 2026
ಯೋಗದೊಟ್ಟುಗ್ ಗೋಸೇವೆ
ಸುದ್ದಿ

ಯೋಗದೊಟ್ಟುಗ್ ಗೋಸೇವೆ

June 24, 2026
Next Post
ಕಾಪುದಪ್ಪೆ

ಕಾಪುದಪ್ಪೆ

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

650/650 ಅಂಕ ಪಡೆಯಿನ ಧನುಶ್ರೀ

650/650 ಅಂಕ ಪಡೆಯಿನ ಧನುಶ್ರೀ

July 23, 2026
ಮಿತ್ರ ಶ್ರೀ ಪ್ರಶಸ್ತಿ

ಮಿತ್ರ ಶ್ರೀ ಪ್ರಶಸ್ತಿ

July 23, 2026
ಸದಾಶಿವ ಕಾಮತ್ ಯಕ್ಷ ಕಲಾ ಪ್ರಶಸ್ತಿ

ಸದಾಶಿವ ಕಾಮತ್ ಯಕ್ಷ ಕಲಾ ಪ್ರಶಸ್ತಿ

July 23, 2026
ಸಾಹಿತಿ ಪುಷ್ಪ ಪ್ರಸಾದ್

ಸಾಹಿತಿ ಪುಷ್ಪ ಪ್ರಸಾದ್

July 23, 2026
ಬಲೆ ತುಲು ಓದುಗ

ಬಲೆ ತುಲು ಓದುಗ

July 23, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ