*ಯೋಗದೊಂದಿಗೆ ಗೋ ಸೇವೆ* *ಗೋಶಾಲೆಗೆ ಸಹಾಯ* ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸಂದ್ಯೋದಯ ಪಿತ್ರೋಡಿ ಬಳಗ ಯೋಗದೊಂದಿಗೆ ಗೋ ಸೇವೆ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 11 ವಿಶ್ವದಾಖಲೆಗಳ ಯೋಗಬಾಲೆ ತನುಶ್ರೀ ಪಿತ್ರೋಡಿ ಪರಿಕಲ್ಪನೆಯಲ್ಲಿ ನಂಚಾರಿನ ಕಾಮಧೇನು ಗೋಶಾಲಾ ಟ್ರಸ್ಟ್ ಗೆ ಸಹಾಯಧನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉದ್ಯಾವರ ಬಿಲ್ಲವ ಮಹಾಜನ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದನಕರುವಿಗೆ ಪುಷ್ಪಹಾರ ಹಾಕಿ ನಮನ ಸಲ್ಲಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನಂಚಾರು ಕಾಮಧೇನು ಗೋಶಾಲ ಮಹಾಸಂಘ ಟ್ರಸ್ಟ್ ಇದರ ಮುಖ್ಯಸ್ಥರಾದ ರಾಜೇಂದ್ರ ಚಕ್ಕೇರಾ ಅವರಿಗೆ ತನುಶ್ರೀ ಪಿತ್ರೋಡಿ ಕಾರ್ಯಕ್ರಮದಲ್ಲಿ ಸಂಗ್ರಹವಾದ ಸುಮಾರು 1.5 ಲಕ್ಷ ರೂಪಾಯಿ ಮೊತ್ತವನ್ನು ಗೋಶಾಲೆಗೆ ನೀಡಿದರು. ಕಾರ್ಯಕ್ರಮದಲ್ಲಿ ಯೋಗಗುರುಗಳಾದ ಹರೀನಾರಾಯಣ ಭಂಡಿ, ಜಗದೀಶ್ ಕುಮಾರ್ ಅವರನ್ನು ಗೌರವಿಸಲಾಯಿತು, ಈ ಸಂದರ್ಭದಲ್ಲಿ ಯೋಗೀಶ್ ಕೋಟ್ಯಾನ್, ಉದ್ಯಾವರ, ಬಿಜೆಪಿ ಮುಖಂಡ ಜಿತೇಂದ್ರ ಶೆಟ್ಟಿ ಉದ್ಯಾವರ, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ನಾಟ್ಯ ಗುರು ರಾಮಕೃಷ್ಣ ಕೊಡಂಚ
ನಾಗೇಶ್ ಕುಮಾರ್ ಉದ್ಯಾವರ,
ಸಿಸ್ಟೆರ್ ಮಯೋಲಾ,
ಗಂಗಾಧರ್ ಕರ್ಕೇರ, ಪ್ರಕಾಶ್ ಕೋಟ್ಯಾನ್,ರಾಘವೇಂದ್ರ ದೇವಾಡಿಗ, ವಿಜಯ್ ಕೋಟ್ಯಾನ್ ಪಿತ್ರೋಡಿ ಹಾಗೂ ಸಂದ್ಯೋದಯ ದಂಪತಿಗಳು ರೀತುಶ್ರೀ, ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ತನುಶ್ರೀ 50 ನಿಮಿಷಡಲ್ಲಿ 300 ಆಸನಗಳನ್ನು ಪ್ರದರ್ಶಿಸಿದರು.






















by