• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home ಸುದ್ದಿ

ಗಾಂಧಿ ಆಸ್ಪತ್ರೆಡ್ ಡಿಜಿಟಲ್ ದಾಖಲೆ

Tulunada Dhwani by Tulunada Dhwani
January 5, 2026
in ಸುದ್ದಿ
0
ಗಾಂಧಿ ಆಸ್ಪತ್ರೆಡ್ ಡಿಜಿಟಲ್ ದಾಖಲೆ
0
SHARES
1
VIEWS
Share on FacebookShare on TwitterShare on WhatsApp

ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ವ್ಯವಸ್ಥೆ ಉದ್ಘಾಟನೆ

ನಗರದ ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಶ್ರೀ ರಾಘವೇಂದ್ರ ಮಠದ ಪೂಜ್ಯರಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಸ್ವಾಮೀಜಿಗಳು, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವ ಮೂಲಕ ಪ್ರಕೃತಿಯ ಸಂರಕ್ಷಣೆ ಸಾಧ್ಯ ಎಂದು ತಿಳಿಸಿದರು. ಕಾಗದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ರಕ್ಷಣೆಗೂ ಸಹಕಾರ ದೊರೆಯುತ್ತದೆ ಎಂದು ಹೇಳಿ, ಇಂತಹ ಐತಿಹಾಸಿಕ ಹಾಗೂ ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡಿರುವ ಗಾಂಧಿ ಆಸ್ಪತ್ರೆಯನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರಿಶ್ಚಂದ್ರ ಹಾಗೂ ಅವರ ಪತ್ನಿ ಶ್ರೀಮತಿ ಲಕ್ಷ್ಮಿ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ವ್ಯಾಸರಾಜ ತಂತ್ರಿ ಅವರು ಕಾರ್ಯಕ್ರಮದ ಪರಿಚಯ ಭಾಷಣ ನೀಡಿ, ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.

ಈ ಉದ್ಘಾಟನಾ ಸಮಾರಂಭದಲ್ಲಿ
ಐಎಂಎ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್,
ಎಪಿಐ ಅಧ್ಯಕ್ಷ ಡಾ. ಸುರೇಶ್ ಹೆಗಡೆ,
ಮಾಜಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಧುಸೂಧನ ನಾಯಕ್,
ಹಿರಿಯ ವೈದ್ಯರಾದ ಡಾ. ಚಂದ್ರಶೇಖರ್ ಅಡಿಗ, ಡಾ. ಆರ್.ಎನ್. ಭಟ್, ಡಾ. ಅಶೋಕ್ ಕುಮಾರ್ ವೈ.ಜಿ.,
ಹೃದಯ ರೋಗ ತಜ್ಞ ಡಾ. ವಿಷುಕುಮಾರ್,
ಡಾ. ಕಿರಣ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು ಡಿಜಿಟಲ್ ದಾಖಲೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಡಿ-ಸ್ಕ್ರೈಬ್ ಸಾಫ್ಟ್‌ವೇರ್‌ನ ಸಹ ಸಂಸ್ಥಾಪಕರಾದ ಶ್ರೀ ಅಕ್ಷಯ ವಿ. ನಾಯಕ್ ಹಾಗೂ ಶ್ರೀ ಕಿರಣ್ ರಾವ್ ಅವರಿಗೆ ಸ್ಮರಣಿಕೆ ನೀಡಿ ಆಶೀರ್ವದಿಸಿದರು.
ಹಿರಿಯರಾದ ಅಗ್ರಹಾರ ಲಕ್ಷ್ಮೀನಾರಾಯಣ ತಂತ್ರೀ ,ಶ್ರೀ ದಾಮೋದರ ಭಟ್ ರವರು ಹಾಗೂ ಉಡುಪಿಯ ರಾಘವೇಂದ್ರ ಮಠದ ವ್ಯವಸ್ಥಾಪಕ ಶ್ರೀ ಜಯತೀರ್ಥ ರವರು ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶ್ರೀಯುತ ಯೂಸುಫ್ ರವರು ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಸಜ್ಜುಗೊಳಿಸಿದರು. ಕರ್ತವ್ಯ ನಿರತ ವೈದ್ಯರು ಹಾಗೂ ರೋಗಿಗಳ ಬಂಧುಗಳು ಸಾಕ್ಷಿಯಾಗಿ ಕಂಡು ಸಂಭ್ರಮಿಸಿದರು.
ಪತ್ರಿಕಾ ಪ್ರಕಟಣೆ (PRESS NOTE)

PRANA-CARE – ನಿಜವಾದ ಪೇಪರ್‌ಲೆಸ್ IPD ವ್ಯವಸ್ಥೆ :
ಸಲಹೆಗಾರರು ಮತ್ತು ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಶೇಷ ಮಾಹಿತಿ ಕಾರ್ಯಕ್ರಮ

ಗಾಂಧಿ ಆಸ್ಪತ್ರೆಯಲ್ಲಿ PRANA-CARE – Paperless Record & Admission for Nursing & Assisted CARE ಎಂಬ ನಿಜವಾದ ಅರ್ಥದ ಪೇಪರ್‌ಲೆಸ್ ಒಳರೋಗಿ (IPD) ದಾಖಲೆ ವ್ಯವಸ್ಥೆಯ ಅನುಷ್ಠಾನ ಕುರಿತು ಸಲಹೆಗಾರ ವೈದ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮವನ್ನು 01-01-2026 ರಂದು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ PRANA-CARE ಪೇಪರ್‌ಲೆಸ್ IPD ವ್ಯವಸ್ಥೆಯನ್ನು ಮಂತ್ರಾಲಯ ಮಠದ ಶ್ರೀ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿಯವರು 27-12-2025 ರಂದು ಉದ್ಘಾಟಿಸಿದ್ದರು. ಅದರ ಮುಂದುವರಿದ ಭಾಗವಾಗಿ, ವ್ಯವಸ್ಥೆಯ ಕಾರ್ಯವಿಧಾನ, ವೈಶಿಷ್ಟ್ಯಗಳು ಹಾಗೂ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹರಿಶ್ಚಂದ್ರ ಅವರು ವಹಿಸಿದ್ದರು. ಅವರು ಮಾತನಾಡಿ ನರ್ಸಿಂಗ್ ಕೇರ್ ನ ಪ್ರಾಮುಖ್ಯತೆ ಒತ್ತಿ ಹೇಳಿದರು

ಕಾರ್ಯಕ್ರಮದಲ್ಲಿ ವೈದ್ಯಕೀಯ ನಿರ್ದೇಶಕರಾದ ಡಾ. ವ್ಯಾಸರಾಜ ತಂತ್ರಿ ಅವರು ಪರಿಚಯ ಭಾಷಣವನ್ನು ನೀಡಿ, ಕೇವಲ ಕಾಗದಗಳನ್ನು ಸ್ಕ್ಯಾನ್ ಮಾಡುವ ಡಿಜಿಟಲೀಕರಣ ಮತ್ತು PRANA-CARE ಮೂಲಕ ಜಾರಿಗೆ ತಂದಿರುವ ನಿಜವಾದ ಪೇಪರ್‌ಲೆಸ್ IPD ವ್ಯವಸ್ಥೆಯ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ವಿವರಿಸಿದರು. PRANA-CARE ವ್ಯವಸ್ಥೆಯಲ್ಲಿ ರೋಗಿ ದಾಖಲಾಗುವ ಕ್ಷಣದಿಂದಲೇ ಎಲ್ಲಾ ವೈದ್ಯಕೀಯ, ನರ್ಸಿಂಗ್ ಹಾಗೂ ಚಿಕಿತ್ಸಾ ದಾಖಲಾತಿಗಳು ನೇರವಾಗಿ ಡಿಜಿಟಲ್ ರೂಪದಲ್ಲೇ ಸೃಜಿಸಲಾಗುತ್ತವೆ ಎಂದು ಅವರು ವಿವರಿಸಿದರು.

D-Scribe ಸಾಫ್ಟ್‌ವೇರ್‌ನ ಸಹ-ಸ್ಥಾಪಕರಾದ ಶ್ರೀ ಅಕ್ಷಯ್ ವಿ. ನಾಯಕ್ ಅವರು PRANA-CARE ವ್ಯವಸ್ಥೆಯ ತಾಂತ್ರಿಕ ಪ್ರಸ್ತುತಿಯನ್ನು ನೀಡಿದರು. ಈ ವೇಳೆ ವ್ಯವಸ್ಥೆಯ ಕಾರ್ಯಕ್ಷಮತೆ, ರಿಯಲ್ ಟೈಮ್ ಡಾಕ್ಯುಮೆಂಟೇಶನ್, ಚಿಕಿತ್ಸಾ ನಿರಂತರತೆ, ದೋಷರಹಿತ ದಾಖಲಾತಿ ಹಾಗೂ ಪರಿಸರ ಸ್ನೇಹಿ ವೈಶಿಷ್ಟ್ಯಗಳನ್ನು ವಿವರಿಸಿದರು.

IMA ಅಧ್ಯಕ್ಷರಾದ ಡಾ. ಅಶೋಕ್ ಕುಮಾರ್ ಅವರು ಮಾತನಾಡಿ, PRANA-CARE ಮಾದರಿಯಂತಹ ಪೇಪರ್‌ಲೆಸ್ ವ್ಯವಸ್ಥೆಗಳು ಭವಿಷ್ಯದ ಆರೋಗ್ಯ ಸೇವೆಗೆ ದಿಕ್ಕು ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಸುಬ್ರಹ್ಮಣ್ಯ ಭಟ್ ಅವರು ಶುಭಾಶಯ ಭಾಷಣ ನೀಡಿ, ಪರಿಸರ ಸಂರಕ್ಷಣೆ ಹಾಗೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುತ್ತಿರುವ ಈ ಪ್ರಯತ್ನವನ್ನು ಶ್ಲಾಘಿಸಿದರು.

ಈ ಕಾರ್ಯಕ್ರಮವನ್ನು ಸಲಹೆಗಾರ ವೈದ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದು, PRANA-CARE ಪೇಪರ್‌ಲೆಸ್ IPD ವ್ಯವಸ್ಥೆಯ ಕಾರ್ಯವಿಧಾನ ಹಾಗೂ ಅದರ ಲಾಭಗಳ ಬಗ್ಗೆ ಸಮಗ್ರ ಒಳನೋಟವನ್ನು ನೀಡಲಾಯಿತು.

PRANA-CARE ವ್ಯವಸ್ಥೆಯ ಮೂಲಕ ಗಾಂಧಿ ಆಸ್ಪತ್ರೆ ಪರಿಸರ ಸಂರಕ್ಷಣೆ, ದಾಖಲೆಗಳ ನಿಖರತೆ, ಚಿಕಿತ್ಸಾ ನಿರಂತರತೆ ಹಾಗೂ ಆಧುನಿಕ ಆರೋಗ್ಯ ಸೇವೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

Previous Post

ಕಾಪುಡ್ ಇಮೇಜ್ ಮೊಬೈಲ್ಸ್  ಒಪ್ಪೊ ಎಕ್ಸ್  ಕ್ಲೂಸಿವ್ ಶೋರೂಂ ಉದಿಪನ.

Next Post

ಸ್ವಾಸ್ಥ್ಯ ಸಂಕಲ್ಪ

Related Posts

ಉದ್ಯೋಗ ಮೇಳ
ಸುದ್ದಿ

ಉದ್ಯೋಗ ಮೇಳ

May 18, 2026
ಮಹಾರುದ್ರ ಯಾಗದ 3 ನೇ ದಿನ
ಸುದ್ದಿ

ಮಹಾರುದ್ರ ಯಾಗದ 3 ನೇ ದಿನ

May 17, 2026
ಗೌತಮ್ ನಾವಡ ಉಪನ್ಯಾಸ
ಸುದ್ದಿ

ಗೌತಮ್ ನಾವಡ ಉಪನ್ಯಾಸ

May 17, 2026
ಆನಂದ ಶರಧಿ ಡ್ ಕೃಷಿ ಮೇಳ
ಸುದ್ದಿ

ಆನಂದ ಶರಧಿ ಡ್ ಕೃಷಿ ಮೇಳ

May 16, 2026
Next Post
ಸ್ವಾಸ್ಥ್ಯ ಸಂಕಲ್ಪ

ಸ್ವಾಸ್ಥ್ಯ ಸಂಕಲ್ಪ

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಮಹಾರುದ್ರ ಯಾಗದ ಸಮಾರೋಪ

ಮಹಾರುದ್ರ ಯಾಗದ ಸಮಾರೋಪ

May 19, 2026
ಕೊಡವೂರು ಮಹಾರುದ್ರ ಯಾಗ

ಕೊಡವೂರು ಮಹಾರುದ್ರ ಯಾಗ

May 19, 2026
ಆನಂದ ಶರಧಿ ಡ್ ಭಜನಾ ಸ್ಪರ್ಧೆ

ಆನಂದ ಶರಧಿ ಡ್ ಭಜನಾ ಸ್ಪರ್ಧೆ

May 19, 2026
ಮಹಾರುದ್ರ ಯಾಗ ಪ್ರಾರಂಭ

ಮಹಾರುದ್ರ ಯಾಗ ಪ್ರಾರಂಭ

May 19, 2026
ಆನಂದ ಶರಧಿಡ್ ಭಜನಾ ಸ್ಪರ್ಧೆ

ಆನಂದ ಶರಧಿಡ್ ಭಜನಾ ಸ್ಪರ್ಧೆ

May 18, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • job
  • kapu marigudi
  • kitchen
  • rajakeeya
  • science
  • shocking news
  • society
  • spl news
  • sports
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ